ದೇಶಭಕ್ತಿ ಗೀತೆ
ವಂದಿಸುವೆ ಭಾರತಾಂಬೆಗೆ
-------------------
ವಂದಿಸುವೆ ಭಾರತಾಂಬೆಗೆ
ಶಾಂತಶೀಲ ಪ್ರತಿರೂಪಿಣಿಗೆ
ಘಟ್ಟಗಳ ಕೈಚಾಚಿಹ
ನದಿನಾಡಿಗಳ ಹರಿಸಿಹ
ಬಹುಭಾಷಾ ಹೂಗಳಿಂದ
ಕುವರಿಯರ ಸಿಂಗರಿಸಿಹ
ಹಸಿರನುಟ್ಟ ಹರಿದ್ವರ್ಣಿಗೆ
ಉಪಖಂಡ ನಾಮಾಂಕಿತೆಗೆ.|ಪ|
ಹಿಮಾಲಯವೆ ನಿನ್ನ ಹೆಳಲು
ಬೈತಲೆ ಆ ಕಣಿವೆಗಳು
ಅಲೆಯ ಸೇವೆ ನೀಡುತಿಹವು
ಸಾಗರ, ದ್ವಿಜಲಧಿಗಳು
ಕಲೆಸಿರಿಯೆ ನಿನ್ನಾಭರಣ
ಕವಿಕಾವ್ಯವೆ ಮಂಜುಳಗಾನ|೧|
ಬೇಡಿ ಬಂದ ಮನುಜರಿಗೆ
ನೆಲೆಯಿಟ್ಟು ಪೊರೆದಾಕೆ
ನಿನ್ನ ಮೌಲ್ಯ ಅರಿತವರಿಗೆ
ಜ್ಞಾನ ಧಾರೆ ಎರೆದಾಕೆ
ಶೂನ್ಯವೆ ಪರಿಪೂರ್ಣವೆಂದು
ಜಗದಗಲಕೂ ತೋರಿದಾಕೆ.|೨|
..... ..... ..... ..... ....
✍..ತ್ರಿನೇತ್ರಜ್
ಶಿವಕುಮಾರ. ಹಿರೇಮಠ.
ವಂದಿಸುವೆ ಭಾರತಾಂಬೆಗೆ
-------------------
ವಂದಿಸುವೆ ಭಾರತಾಂಬೆಗೆ
ಶಾಂತಶೀಲ ಪ್ರತಿರೂಪಿಣಿಗೆ
ಘಟ್ಟಗಳ ಕೈಚಾಚಿಹ
ನದಿನಾಡಿಗಳ ಹರಿಸಿಹ
ಬಹುಭಾಷಾ ಹೂಗಳಿಂದ
ಕುವರಿಯರ ಸಿಂಗರಿಸಿಹ
ಹಸಿರನುಟ್ಟ ಹರಿದ್ವರ್ಣಿಗೆ
ಉಪಖಂಡ ನಾಮಾಂಕಿತೆಗೆ.|ಪ|
ಹಿಮಾಲಯವೆ ನಿನ್ನ ಹೆಳಲು
ಬೈತಲೆ ಆ ಕಣಿವೆಗಳು
ಅಲೆಯ ಸೇವೆ ನೀಡುತಿಹವು
ಸಾಗರ, ದ್ವಿಜಲಧಿಗಳು
ಕಲೆಸಿರಿಯೆ ನಿನ್ನಾಭರಣ
ಕವಿಕಾವ್ಯವೆ ಮಂಜುಳಗಾನ|೧|
ಬೇಡಿ ಬಂದ ಮನುಜರಿಗೆ
ನೆಲೆಯಿಟ್ಟು ಪೊರೆದಾಕೆ
ನಿನ್ನ ಮೌಲ್ಯ ಅರಿತವರಿಗೆ
ಜ್ಞಾನ ಧಾರೆ ಎರೆದಾಕೆ
ಶೂನ್ಯವೆ ಪರಿಪೂರ್ಣವೆಂದು
ಜಗದಗಲಕೂ ತೋರಿದಾಕೆ.|೨|
..... ..... ..... ..... ....
✍..ತ್ರಿನೇತ್ರಜ್
ಶಿವಕುಮಾರ. ಹಿರೇಮಠ.
No comments:
Post a Comment