ಬೆಂಮಳೆ
ನದಿ ಹರಿಯದೂರಲ್ಲಿರಸ್ತೆಯಲ್ಲೇ ನೀರಹೊಳೆ,
ಲೆಕ್ಕತಪ್ಪಿ ಸುರಿಯುತ್ತಿದೆ
ಕುಂಭದ್ರೋಣ ಮಳೆ.
ಕಾಂಕ್ರೀಟ್ ಬೆಂಗಳೂರಲ್ಲಿ
ಕೆರೆಗಳು ಕಳವು ಆಗುತಿರೆ;
ಭೂಮಿಗೆ ಬರೆ ಎಳೆದಂತೆ
ಟಾರು ರಸ್ತೆಗಳು ಹರಡಿರೆ;
ಕೊಚ್ಚೆನೀರು ಹುಚ್ಚೆದ್ದು
ನೊರೆಯುಕ್ಕಿ ಹರಿಯುತಿರೆ,
ಕಾಣದ ಗುಂಡಿಹೊಂಡಗಳು
ಬಲಿಗಾಗಿ ಬಾಯ್ತೆರೆದಿರೆ,
ಕಾರು,ಬಾರು ಪ್ರೀಯರೇ,
ಹುಷಾರು, ಪಾದಚಾರಿಗಳೇ.
ಎಚ್ಚರ! ಎರಡ್ಗಾಲಿಯವರೆ.
ಆಯತಪ್ಪೆ, ಬಾಳುಗೋಳೇ.
ಗುಡಿ - ಮನೆಗಳೆನ್ನದೆ
ಓಳ ನುಗ್ಗತ್ತಿದೆ ನೀರು.
ಹಟ ಬಿಡು ಮಳೆರಾಯ,
ಸುಸ್ತಾಗಿಹರು ಜನರು.
ಶಿವಕುಮಾರ್.ಹಿರೇಮಠ್.
ಪ್ರೌಢ ಶಾಲಾ ಶಿಕ್ಷಕರು.
No comments:
Post a Comment