Wednesday 18 October 2017

ಕನ್ನಡ ಕವನ 'ದೀಪಾವಳಿ ಆಶಯ'

              ದೀಪಾವಳಿ  ಆಶಯ                         


ಹಣತೆಯ ಹಚ್ಚುತ ತಮಸ್ಸನು ತೊರೆವಾ 
ಬನ್ನಿ ಭಾರತದ ಬಂಧುಗಳೆ.
ಸಮತೆ ಸಾರುತ ಸಿಹಿಯನು ಹಂಚುವಾ;
ಸುರಿಸಿ ಪ್ರೀತಿಯ ಹೂಮಳೆ.

ಮತ್ತೇಕೆ ತಡವಿನ್ನು? ತನ್ನಿರಿ ಹಣತೆಗಳನು,
ಮನಸಿಚ್ಚೆ ಬೆಳಗಿ ಮನೆ-ಮನಗಳನು.
ಮನವಿಟ್ಟು ಕೋರುವೆ ನರಕ ಚತುರ್ದಶಿಗೆ, 
ಮತ್ತೆ ದೀಪಾವಳಿಗೆ ಶುಭಾಶಯಗಳನು.

ಸದ್ದನು ಮಾಡುತಾ ಸುಡದಿರಿ ಮದ್ದನು
ಸಾಕೆಮಗೆ ದೀಪದ ಹೊಂಬೆಳಕು.
ಸಡಗರದ ನೆಪದಿ ಪರಿಸರವ ಕೆಡಿಸದಿರಿ.
ಸದ್ದುಗದ್ದಲ ನಾವು ತಡೆಯಬೇಕು.

ತ್ರಿನೇತ್ರಜ.
............ಶಿವಕುಮಾರ.ಹಿರೇಮಠ.
               ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.






No comments:

Post a Comment