Thursday 26 October 2017

"ಕವನವಿಶೇಷ"

            . ಕಾವ್ಯ ವಿಶೇಷ. 

ಕವನವು ಕಂಡ ಕಂಡವರು
ಗೀಚಬಲ್ಲ ಸಾಲುಗಳಲ್ಲ.
ಕವಿಋಷಿಯು ಭಾವದಲಿ
ಕಂಡ ಅನುಭವ ಜ್ಞಾನಫಲ.

ಅವರಿವರು ಬಯಸಿದಾಗ

ಗೆರೆಗಳ ಎಳೆವ ಚಿತ್ರವಲ್ಲ. 
ಕವಿ ಪದಗಳಲ್ಲುಕ್ಕಿಸೋ
ಆ ಕ್ಷಣದ ಭಾವನೆಗಳ ಜಲ

ಕವಿ ಬರೆದು ಮುಂದಿಟ್ಟರೆ
ಸಾಕೇ? ಇಲ್ಲ. ಶುದ್ಧ ತಪ್ಪು. 
ವಿಮರ್ಶೆಯ ಮೂಸೆಯಲದ್ದಿ
ಓದುಗ ಹೇಳಬೇಕು ತಪ್ಪು ಓಪ್ಪು.
          ..... ...... ...... ......
✍  ತ್ರಿನೇತ್ರಜ.

No comments:

Post a Comment