. ಕಾವ್ಯ ವಿಶೇಷ.
ಕವನವು ಕಂಡ ಕಂಡವರುಗೀಚಬಲ್ಲ ಸಾಲುಗಳಲ್ಲ.
ಕವಿಋಷಿಯು ಭಾವದಲಿ
ಕಂಡ ಅನುಭವ ಜ್ಞಾನಫಲ.
ಅವರಿವರು ಬಯಸಿದಾಗ
ಗೆರೆಗಳ ಎಳೆವ ಚಿತ್ರವಲ್ಲ.
ಕವಿ ಪದಗಳಲ್ಲುಕ್ಕಿಸೋ
ಆ ಕ್ಷಣದ ಭಾವನೆಗಳ ಜಲ
ಕವಿ ಬರೆದು ಮುಂದಿಟ್ಟರೆ
ಸಾಕೇ? ಇಲ್ಲ. ಶುದ್ಧ ತಪ್ಪು.
ವಿಮರ್ಶೆಯ ಮೂಸೆಯಲದ್ದಿ
ಓದುಗ ಹೇಳಬೇಕು ತಪ್ಪು ಓಪ್ಪು.
..... ...... ...... ......
✍ ತ್ರಿನೇತ್ರಜ.
No comments:
Post a Comment