Sunday 15 April 2018

ಮನಃಶಾಂತಿ ಅರಸಿ

[03/04, 10:49 p.m.]

     *ಮನಃಶಾಂತಿ ಅರಸಿ*
ಸದ್ದು ಗದ್ದಲದ ಜಗದಲ್ಲಿ
ಏಕೋ ನೆಮ್ಮದಿ ಕಾಣೆ
ಎಲ್ಲೆಡೆ ಎಲ್ಲರ ಪೂತ್ಕಾರ
ಚೀತ್ಕಾರ ಹಾಹಾಕಾರ
ಕೆಲವೆಡೆ ಕೆಲವರಿಗೆ
ಜೈಕಾರ ,ಮಣ ಹಾರ:
ಎದುರಾಡಿ ವಿರೋಧವ
ಕಟ್ಟಿಕೊಂಡರೆ ದಿಕ್ಕಾರ!
ಇಲ್ಲ ,ಇಲ್ಲೆಲ್ಲೂ ಸಿಗುತ್ತಿಲ್ಲ
ಸಹನೆಯ ಮಂದಾರ
ಹಿಡಿಯಷ್ಟು ಹೃದಯಕ್ಕೆ
ತಂಪೆರೆವ ಮಮಕಾರ
ಮಾನವತೆಯ ಮರೆತಲ್ಲಿ
ಸ್ವಾರ್ಥದ ಸಾಕ್ಷಾತ್ಕಾರ
ಹೊರಟೇ ಹೋಯಿತು
ಆತ್ಮ ವು ಕೂಗಿ ದಿಕ್ಕಾರ
ಮನಶಾಂತಿಯ ಹುಡುಕಿ
ಈ ಜಗದಿಂದಲೇ ದೂರ
✍ ತ್ರಿನೇತ್ರಜ
ಶಿವಕುಮಾರ. ಹಿರೇಮಠ.
,,....,
[04/04, 10:05 a.m.] 
ಕೂರ್ಮಪುತ್ರಿ
ಟೈಟಾನಿಕ್
ಹಿರೋಯಿನ್?
ಅಲ್ಲ, ಕೈಟಾಗಿ
ಕ್ಲೌಡಿನ ಮಡಿಲ
ಸೇರಬಯಸುವ
ಕೂರ್ಮಪುತ್ರಿ
ಟಾರ್ಟಾಯಿನ್.
ತ್ರಿನೇತ್ರಜ

Sunday 1 April 2018

ಸಿದ್ದಗಂಗಾ ಕಣ್ಮಣಿ




ಸಿದ್ದಗಂಗಾ  ಡಾ.ಶಿವಕುಮಾರ ಸ್ವಾಮಿಜಿಯವರ 111ನೇ ಜನ್ಮದಿನಾಚರಣೆ ನಿಮಿತ್ಯ

*ಸಿದ್ದಗಂಗಾ ಕಣ್ಮಣಿ*

ಗಂಧದ ಗುಡಿಯಲಿ
ನೆಲೆಸಿಹ ಶರಣರು
ಸಿದ್ದಗಂಗಾ ಶ್ರೀ ಗಳು
ನಡೆದಾಡುವ ದೇವರು ||ಪ||

ತ್ರಿವಿಧ ದಾಸೋಹ
ನಡೆಸುತ ಸಾಗಿಹ
ಕನ್ನಡ ನಾಡಿನ ಹಿರಿಮೆಯೆ
ಧರ್ಮ ಸಾರುವ
ಶಿಕ್ಷಣ ಬೀರುವ
ಸಿದ್ದಗಂಗೆಯ ಕಣ್ಮಣಿಯೆ
ಭಕ್ತರ ಪಾಲಿಗೆ
ಕರುಣಾಂಬುದಿಯೆ ||೧||

ಕಾಯಕದಲೆ
ಕೈಲಾಸವೆಂಬುದು
ಸಿದ್ದಗಂಗೆಯಲಿ ಕಾಣುವುದು
ಶತಾಯುಷಿಗಳ
ಪಾದ ಸ್ಪರ್ಷವೇ
ಧನ್ಯ ಭಾವವ ತುಂಬುವುದು
ಅಹಂ ಭಾವವು
ಕಳೆಯುವುದು ||೨||

ಕರ್ನಾಟಕ ರತ್ನ
ಪದ್ಮಭೂಷಣ
ಶ್ರೀ ಗಳ ಮುಕುಟ ಮಣಿಗಳು
ಭಾರತ ದೇಶದ
ಅನುಪಮ ರತುನ
ಶ್ರೀ ಶಿವಕುಮಾರ ಗುರುಗಳು
ತಮಗೆ ಸಾವಿರದ
ನಮನಗಳು||೩||

✍🏼 ತ್ರಿನೇತ್ರಜ್.

ಶ್ರೀ. ಶಿವಕುಮಾರ. ಹಿರೇಮಠ.

*ಎಲ್ಲರಂತೆ ನಾನು*



 *ಎಲ್ಲರಂತೆ ನಾನು*

ಎಲ್ಲರೊಳೊಂದಾಗುವುದು
ಈ ಜಗದ ಧರ್ಮ
ಧರ್ಮದಂತೆ ನಡೆಯೋದೆ
ಇಲ್ಲಿ ನನ್ನ ಕರ್ಮ
ನಿಸ್ವಾರ್ಥ ಜಗದೊಳು ಸ್ವಾರ್ಥಿಯಾಗಲಾರೆ
ನಿಷ್ಕಪಟ ಜನರ ಮಧ್ಯೆ
ಕಪಟಿ ನಾನಾಗಲಾರೆ ||ಪ||

ತೇಯ್ದಷ್ಟು ಕಂಪನು
ಬೀರುವುದು ಗಂಧ
ದೇವನ ನೊಸಲನು
ಸೇರೇ ಇನ್ನೂ ಚಂದ
ಗಂಧ ನಿರ್ಜೀವಿ ತಾನು
ಮನುಜ ಜೀವಿ ನಾನು ||೧||

ಪರರಿತ್ತ ನಾತಹೊತ್ತು
ಸಾಗುತಿಹುದು ಗಾಳಿ
ಬೀಸದಿರೆ ತಾ ಜಗಕೆಲ್ಲ
ತಪ್ಪಲಾರದು ಕವಳಿ
ನೋವು ನಲಿವು ಗಾಳಿಗಿಲ್ಲ
ಮನುಜ ನಾ ಗಾಳಿಯಲ್ಲ||೨||

✍🏼 ತ್ರಿನೇತ್ರಜ್

ಶಿವಕುಮಾರ ಹಿರೇಮಠ