29/12/2017, 10:34 p.m.
ಭಾವಗೀತೆ
ಕನ್ನಡವೆಮ್ಮನುಡಿಸಿರಿ
ಕನ್ನಡವೆಮ್ಮ ನುಡಿಸಿರಿ
ಕರುನಾಡೆ ನಮ್ಮ ಐಸಿರಿ|ಪ|
ಮಲೆನಾಡಿನ ಮಧುರ ಕನ್ನಡ
ಮಂಜುಳ ಗಾನದಂತೆ.
ಬಯಲುಸೀವೆಯ ಗಟ್ಟಿ ಕನ್ನಡ
ಫಿರಂಗಿ ಗುಂಡಿನಂತೆ.
ಮೈಸೂರಿನ ಮುದ್ದು ಕನ್ನಡ
ಮಲ್ಲಿಗೆಯು ಅರಳಿದಂತೆ.
ಗಡಿನಾಡಿನಲಿ ಉಲಿವ ಕನ್ನಡ
ಜೇನ್ ಬೆರೆತ ಹಾಲಿನಂತೆ...|೧|
ರನ್ನ,ಪೊನ್ನರ,ಪಂಪ ಜನ್ನರ
ಜೀವವಾಣಿ ಈ ನುಡಿಯು.
ಕುಮಾರವ್ಯಾಸರು ರಾಘವಾಂಕರು
ಹಾಡಿಹ ರಸಝರಿಯು.
ಶರಣರ ವಚನ ದಾಸರ ಪದಗಳ,
ಜನಪದ ಸಾಹಿತ್ಯದ ಬೀಡು
ಅಷ್ಟ ಜ್ಞಾನಪೀಠ ಗೌರವ ಪಡೆದಿಹ
ಭುವನೇಶ್ವರಿಯ ಹೊನ್ನಾಡು.|೨|
✍🏼 _ತ್ರಿನೇತ್ರಜ_
ಶಿವಕುಮಾರ.ಹಿರೇಮಠ.
✍🏼 ತ್ರಿನೇತ್ರಜ
ಶ್ರೀ ಶಿವಕುಮಾರ. ಹಿರೇಮಠ.
ಬಾಗಲಕೋಟೆ.
shivakumarh13 @gmail.com
ಭಾವಗೀತೆ
ಕನ್ನಡವೆಮ್ಮನುಡಿಸಿರಿ
ಕನ್ನಡವೆಮ್ಮ ನುಡಿಸಿರಿ
ಕರುನಾಡೆ ನಮ್ಮ ಐಸಿರಿ|ಪ|
ಮಲೆನಾಡಿನ ಮಧುರ ಕನ್ನಡ
ಮಂಜುಳ ಗಾನದಂತೆ.
ಬಯಲುಸೀವೆಯ ಗಟ್ಟಿ ಕನ್ನಡ
ಫಿರಂಗಿ ಗುಂಡಿನಂತೆ.
ಮೈಸೂರಿನ ಮುದ್ದು ಕನ್ನಡ
ಮಲ್ಲಿಗೆಯು ಅರಳಿದಂತೆ.
ಗಡಿನಾಡಿನಲಿ ಉಲಿವ ಕನ್ನಡ
ಜೇನ್ ಬೆರೆತ ಹಾಲಿನಂತೆ...|೧|
ರನ್ನ,ಪೊನ್ನರ,ಪಂಪ ಜನ್ನರ
ಜೀವವಾಣಿ ಈ ನುಡಿಯು.
ಕುಮಾರವ್ಯಾಸರು ರಾಘವಾಂಕರು
ಹಾಡಿಹ ರಸಝರಿಯು.
ಶರಣರ ವಚನ ದಾಸರ ಪದಗಳ,
ಜನಪದ ಸಾಹಿತ್ಯದ ಬೀಡು
ಅಷ್ಟ ಜ್ಞಾನಪೀಠ ಗೌರವ ಪಡೆದಿಹ
ಭುವನೇಶ್ವರಿಯ ಹೊನ್ನಾಡು.|೨|
✍🏼 _ತ್ರಿನೇತ್ರಜ_
ಶಿವಕುಮಾರ.ಹಿರೇಮಠ.
✍🏼 ತ್ರಿನೇತ್ರಜ
ಶ್ರೀ ಶಿವಕುಮಾರ. ಹಿರೇಮಠ.
ಬಾಗಲಕೋಟೆ.
shivakumarh13 @gmail.com
No comments:
Post a Comment