Wednesday 21 February 2018

ಕನ್ನಡವೆಮ್ಮ ನುಡಿಸಿರಿ

29/12/2017, 10:34 p.m.
 ಭಾವಗೀತೆ

ಕನ್ನಡವೆಮ್ಮನುಡಿಸಿರಿ


ಕನ್ನಡವೆಮ್ಮ ನುಡಿಸಿರಿ
ಕರುನಾಡೆ ನಮ್ಮ ಐಸಿರಿ|ಪ|

ಮಲೆನಾಡಿನ ಮಧುರ ಕನ್ನಡ

ಮಂಜುಳ ಗಾನದಂತೆ.
ಬಯಲುಸೀವೆಯ ಗಟ್ಟಿ ಕನ್ನಡ
ಫಿರಂಗಿ ಗುಂಡಿನಂತೆ.
ಮೈಸೂರಿನ ಮುದ್ದು ಕನ್ನಡ
ಮಲ್ಲಿಗೆಯು ಅರಳಿದಂತೆ.
ಗಡಿನಾಡಿನಲಿ ಉಲಿವ ಕನ್ನಡ
ಜೇನ್ ಬೆರೆತ ಹಾಲಿನಂತೆ...|೧|

ರನ್ನ,ಪೊನ್ನರ,ಪಂಪ ಜನ್ನರ
ಜೀವವಾಣಿ ಈ ನುಡಿಯು.
ಕುಮಾರವ್ಯಾಸರು ರಾಘವಾಂಕರು 
ಹಾಡಿಹ ರಸಝರಿಯು.
ಶರಣರ ವಚನ ದಾಸರ ಪದಗಳ, 
ಜನಪದ ಸಾಹಿತ್ಯದ ಬೀಡು
ಅಷ್ಟ ಜ್ಞಾನಪೀಠ ಗೌರವ ಪಡೆದಿಹ 
ಭುವನೇಶ್ವರಿಯ  ಹೊನ್ನಾಡು.|೨|

✍🏼 _ತ್ರಿನೇತ್ರಜ_

ಶಿವಕುಮಾರ.ಹಿರೇಮಠ.




✍🏼 ತ್ರಿನೇತ್ರಜ


ಶ್ರೀ ಶಿವಕುಮಾರ. ಹಿರೇಮಠ.
ಬಾಗಲಕೋಟೆ.
shivakumarh13 @gmail.com

No comments:

Post a Comment