Tuesday 27 February 2018

ಹತ್ತು ಹನಿಗವನಗಳು-೧

ಹನಿಗವನ-1

 ಸಮರಸ
----'''''----
ಪತಿತೆಯೊಡನೆ ಸರಸಕ್ಕಿಂತ
ಸತಿಯೊಡನೆ ವಿರಸ
ಸಮರವೇ ಲೇಸು.
ಸೋತರೂ ಗೆದ್ದರೂ
ಸಮರಸವೇ ಆಗುವುದು ಬಾಳು.
..... ...... ....... .......

ಹನಿಗವನ-2

          ಬಂಧಿ
-------'''-----
ಸರಸವನ್ನರಸಿ ನಿನ್ನ
ತೋಳಸೆರೆಯಲಿ ಸೇರಿದ
ಸಮಯದಿಂದ ನಾ
ಸದ್ದಿಲ್ಲದೆ ನನ್ನ ಸ್ವಂತಿಕೆಗೆ
ತೋರಿದೆ ಸಾವಿನೂರ.
ತಾಯಿಯಾದಳು ದೂರ,
ಬದುಕೀಗ ಬಲುಬೇಸರ.
...... ..... ..... .... .....
✍..ತ್ರಿನೇತ್ರಜ.

ಹನಿಗವನ -3

[19/11, 6:59 p.m.]
       ಸತ್ಯ ಕಹಿ
..... ...... ..... ......
'ಮುಖ ಪುಸ್ತಕ'ದಲ್ಲಿನ  
ಭಾವಚಿತ್ರಕೆ ಸೋತು👩🏻
'ಪ್ರೀತ್ಸೊಣ ಬಾ' ಎಂದ್ಬುಟ್ಟೆ.
ಮನೆಗ್ಬಂದ್ಬುಟ್ಟು, ನಿನ್ನ  👧🏾
ಮುಖತೋರ್ಸಿ ನನ್ನ
ಹೃದಯಾನೇ ಒಡದ್ಬುಟ್ಟೆ.😳🤢😭

ಹನಿಗವನ -4
[19/11, 8:46 p.m.]

     ಏಕೆ ಹೀಗಾಯ್ತೊ?
...........................

ಪ್ರೇಮಿಗಳ ದಿನ ಅವಳೆಂದಳು
'ಸೆಲ್ ಒಂದು ತಂದುಕೊಡಿ'.
ಒಂದೇ ಏಕೆಂದು ಎರಡು
ಎವರೆಡಿ ತಂದು ಕೊಟ್ಟೆ ನೋಡಿ.
ಅಂದಿನಿಂದ ದೂರಾದಳಲ್ಲ! ನನ್ನ ಹೃದಯವಾಯ್ತು ಒಡೆದ ಕನ್ನಡಿ.
...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಹನಿಗವನ -5
[20/11, 8:45 p.m.]
.... ... ... .... .... .... ... ....
         ಅರ್ಥ ಆಯ್ತು ಬಿಡಿ!!    
        ----------------
ಜಪಾನ್ ಅಲ್ಲ ಇದು ನಮ್ಮ  ಭಾರತ.
ಮತ್ಯಾಕೆ ಇವರಿಗೆ ಈ ಧಾವಂತ?
ತಾಲೀಮು ನಡೆಸಿ ಸಜ್ಜಾಗುತ್ತಿದ್ದಾರೆ  ಇವರುಗಳು.
ಆಗಲು ನಮ್ಮ ದೇಶದ ಭಾವಿ
ಅಧಿಕಾರಿಗಳು!!
ತಪ್ಪಿದ್ರೆ ದೇಶೊದ್ಧಾರಕ ಭಾವಿ
ರಾಜಕಾರಣಿಗಳು!!!
 ...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

ಹನಿಗವನ -6
[26/11, 8:42 p.m.]
........................
    ಪರಿಸರ ಬಂಧು
..........................
"ದುಡ್ಡೇ ದೊಡ್ಡಪ್ಪ" ಎಂಬ
ಮಾತೀಗ ಹಳತಾಯ್ತು.
ಪರಿಸರವೇ ಪ್ರಾಣಮೂಲ
ಎಂಬುದು ಮನನವಾಯ್ತು.
ತಿಮ್ಮಕ್ಕನ ಕಾರ್ಯಕ್ಕೆ
ತಲೆಬಾಗುವಂತಾಯ್ತು.
ಖಗಕೆ ನೆಲೆ,ಮೃಗಕೆ ಛಾಯೆ;
ಕೀರ್ತಿ ಅಜರಾಮರವಾಯ್ತು.
... ..  ...  ...  ...  ... ...
✍.. ತ್ರಿನೇತ್ರಜ.

ಹನಿಗವನ -7
[27/11, 7:08 p.m.]

  ಕನ್ನಡಿಗನಾಸೆ

ಹೆಸರಾಯಿತು, ಉಸಿರಾಯಿತು;
ಜಗದ ಹಸಿರಾಗಲಿ ನಮ್ಮ ಕನ್ನಡ.
ನುಡಿಯಾಯ್ತು,ಬರಹವಾಯ್ತು;
ಹಾಸುಹೊಕ್ಕಾಗಬೇಕಿದೆ ಕನ್ನಡ.
............................
✍..ತ್ರಿನೇತ್ರಜ.


[27/11, 9:00 p.m.]
ಹನಿಗವನ -8
ಕ್ಷಮಿಸಿಸಲ್ಲ.
................
ಕನ್ನಡ ಎನೆ ಎದೆ ಉಬ್ಬುವುದಿಲ್ಲ?
ಕನ್ನಡ ಎನೆ ಕಿವಿ ನಿಮಿರುವುದಿಲ್ಲ?
ನಿನ್ನದೊಂದು ಜನ್ಮವೇ ಅಲ್ಲ.
ಅನ್ಯಭಾಷೆಯ
ದಾಸ್ಯಕೆ ಜಾರಿಹರನ್ನ
ಕನ್ನಡಾಂಬೆ ಕ್ಷಮಿಸುವುದೂ ಇಲ್ಲ.
................
✍..ತ್ರಿನೇತ್ರಜ

ಹನಿಗವನ -9

 *ಪರೀಕ್ಷೆ* 
ಕಾದೆ, ಕಾದು ಸಾಕಾದೆ
ಆದರೂ ಇದೆ ನಿರೀಕ್ಷೆ
ಜಿಡ್ಡುಗಟ್ಟಿದೀ ಮನಕೆ
ನೀಡು ಕೊಂಚ ದೀಕ್ಷೆ
ಈಜಿ ಸಾಧಿಸಲೇಬೇಕು
ದೇವರಿಟ್ಟ ಈ ಪರೀಕ್ಷೆ
        ............
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ

ಹನಿಗವನ -10
ಆಹಾ!   ಕನ್ನಡ..
......................
ಹೃದಯಕ್ಕೆ ಹಗುರ,
ಅಧರಕ್ಕೆ ಮಧುರ,
ಕನ್ನಡದ ನುಡಿಸಾರ,
ಹೀರೇ; ಪಂಡಿತನಂತೆ
ಈ ಪಾಮರ!

ಬರೆದರೆ ಬಂಗಾರ,
ಜ್ಞಾನಪೀಠ ಹಂದರ,
ಕರುನಾಡ ಶೃಂಗಾರ,
ಕನ್ನಡ ಸವಿನುಡಿಯು
ಸವಿ ನಾದಸ್ವರ.
.....................
✍..ತ್ರಿನೇತ್ರಜ
ಶಿವಕುಮಾರ.ಹಿರೇಮಠ.

No comments:

Post a Comment