Wednesday 21 February 2018

*ದಾಹ*

‌‌‌‌ಭಾವಗೀತೆ
       *ದಾಹ*
[12/12/2017, 7:24 p.m.] 
ದಾಹವೆಂಬ ಭಾವನಾದವು
ತುಂಬಿಕೊಂಡು ತನುಮನ
ತಣಿಯದಂತ ತುಡಿತದಿಂದ ತಳಮಳಿಸಿಹುದು ಜೀವನ.

ತೋಟದಲ್ಲಿ ತುಂಬಿದೆ
ಅಗಣಿತಕಲ್ಪ ಸಿಹಿ ಫಲ.
ಕೈಗೆಟುಕದ ಎತ್ತರಕ್ಕಿದೆ!
ಯತ್ನಿಸದಿರೆ ಏನುಫಲ?

ಹಸಿವ ನೀಗಲು ಕುಡಿದೆನು
ಮನದಣಿಯೇ ಜ್ಞಾನ ಜಲ.
ಎತ್ತರೆತ್ತರಕ್ಕೆ ಏರಲು ಎನಗೆ
ಕೂಡಿಬರಲಿ ಬೇಗನೆ ಕಾಲ.

ಶ್ರೇಷ್ಠರು ನೀಡಿಹೋಗಿಹ
ಜ್ಞಾನಕಣಜವೇ ಬೆನ್ನಿಗಿದೆ.
ಸಾಧಕರ ಶಿಖರವನೇರೊ
ಆಸೆ ಎದೆಯ ತುಂಬಿದೆ.

ಹಾರೈಕೆ ಹೆತ್ತವರದು
ಸದಾ ರಕ್ಷೆಯ ನೀಡಿದೆ.
ಗುರಿಯು ಬಲು ಎತ್ತರ
ಸಾಧಿಸುವೆ ಛಲಬಿಡದೆ.
~~~~~~~~~~~~~~
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

No comments:

Post a Comment