Sunday 15 April 2018

ಮನಃಶಾಂತಿ ಅರಸಿ

[03/04, 10:49 p.m.]

     *ಮನಃಶಾಂತಿ ಅರಸಿ*
ಸದ್ದು ಗದ್ದಲದ ಜಗದಲ್ಲಿ
ಏಕೋ ನೆಮ್ಮದಿ ಕಾಣೆ
ಎಲ್ಲೆಡೆ ಎಲ್ಲರ ಪೂತ್ಕಾರ
ಚೀತ್ಕಾರ ಹಾಹಾಕಾರ
ಕೆಲವೆಡೆ ಕೆಲವರಿಗೆ
ಜೈಕಾರ ,ಮಣ ಹಾರ:
ಎದುರಾಡಿ ವಿರೋಧವ
ಕಟ್ಟಿಕೊಂಡರೆ ದಿಕ್ಕಾರ!
ಇಲ್ಲ ,ಇಲ್ಲೆಲ್ಲೂ ಸಿಗುತ್ತಿಲ್ಲ
ಸಹನೆಯ ಮಂದಾರ
ಹಿಡಿಯಷ್ಟು ಹೃದಯಕ್ಕೆ
ತಂಪೆರೆವ ಮಮಕಾರ
ಮಾನವತೆಯ ಮರೆತಲ್ಲಿ
ಸ್ವಾರ್ಥದ ಸಾಕ್ಷಾತ್ಕಾರ
ಹೊರಟೇ ಹೋಯಿತು
ಆತ್ಮ ವು ಕೂಗಿ ದಿಕ್ಕಾರ
ಮನಶಾಂತಿಯ ಹುಡುಕಿ
ಈ ಜಗದಿಂದಲೇ ದೂರ
✍ ತ್ರಿನೇತ್ರಜ
ಶಿವಕುಮಾರ. ಹಿರೇಮಠ.
,,....,
[04/04, 10:05 a.m.] 
ಕೂರ್ಮಪುತ್ರಿ
ಟೈಟಾನಿಕ್
ಹಿರೋಯಿನ್?
ಅಲ್ಲ, ಕೈಟಾಗಿ
ಕ್ಲೌಡಿನ ಮಡಿಲ
ಸೇರಬಯಸುವ
ಕೂರ್ಮಪುತ್ರಿ
ಟಾರ್ಟಾಯಿನ್.
ತ್ರಿನೇತ್ರಜ

No comments:

Post a Comment