ಗಂಧದ ಗುಡಿಯಲಿ
ನೆಲೆಸಿಹ ಶರಣರು
ಸಿದ್ದಗಂಗಾ ಶ್ರೀ ಗಳು
ನಡೆದಾಡುವ ದೇವರು ||ಪ||
ತ್ರಿವಿಧ ದಾಸೋಹ
ನಡೆಸುತ ಸಾಗಿಹ
ಕನ್ನಡ ನಾಡಿನ ಹಿರಿಮೆಯೆ
ಧರ್ಮ ಸಾರುವ
ಶಿಕ್ಷಣ ಬೀರುವ
ಸಿದ್ದಗಂಗೆಯ ಕಣ್ಮಣಿಯೆ
ಭಕ್ತರ ಪಾಲಿಗೆ
ಕರುಣಾಂಬುದಿಯೆ ||೧||
ಕಾಯಕದಲೆ
ಕೈಲಾಸವೆಂಬುದು
ಸಿದ್ದಗಂಗೆಯಲಿ ಕಾಣುವುದು
ಶತಾಯುಷಿಗಳ
ಪಾದ ಸ್ಪರ್ಷವೇ
ಧನ್ಯ ಭಾವವ ತುಂಬುವುದು
ಅಹಂ ಭಾವವು
ಕಳೆಯುವುದು ||೨||
ಕರ್ನಾಟಕ ರತ್ನ
ಪದ್ಮಭೂಷಣ
ಶ್ರೀ ಗಳ ಮುಕುಟ ಮಣಿಗಳು
ಭಾರತ ದೇಶದ
ಅನುಪಮ ರತುನ
ಶ್ರೀ ಶಿವಕುಮಾರ ಗುರುಗಳು
ತಮಗೆ ಸಾವಿರದ
ನಮನಗಳು||೩||
✍🏼 ತ್ರಿನೇತ್ರಜ್.
ಶ್ರೀ. ಶಿವಕುಮಾರ. ಹಿರೇಮಠ.
No comments:
Post a Comment