ಕಾಯಕಯೋಗಿ

ಹಚ್ಚಿದ ದೀಪ
ಹೆಚ್ಚೊತ್ತು ಇರದೆ
ತಿಳಿಗಾಳಿಯನೂ
ತಾ ತಾಳದೆ ಆರಿದೆ.
ಕತ್ತಲೇನಿಲ್ಲ ದೀಪದ
ಕೆಳಗೂ, ಸುತ್ತಲೂ;
ಸ್ಪಷ್ಟ ಬೆಳಕಿದೆಯಲ್ಲಾ
ಅತ್ತ-ಇತ್ತ ಎತ್ತೆತ್ತಲೂ!
ಆದರೂ ಹತ್ತುವೆ
ಮತ್ತೆ ಮತ್ತೆ ಹಚ್ಚಲು.
ಅದು ಬೆಳಗಬೇಕೆಂದು,
ಬೆಳಕನಿನ್ನೂ ಹೆಚ್ಚಿಸಲು.
'ಮೆದು-ಮೇಣದಬತ್ತಿ'
ಎಂಬುದದರ ಹೆಸರು.
ತಲೆ ಇರುವ ನನಗೆ
'ದೀಪದಕಡ್ಡಿ'ಎನ್ನುವರು.
ನನ್ನಂಥವರೆ ನನ್ನ
ಹತ್ತಿಸಿ ಉತ್ತೇಜಿಸಿದ್ದು.
ನನ್ನವರ ಕೊಡುಗೆಯೇ
ನನಗೆ ಏಣಿಯಾಗಿದ್ದು.
ದೀಪಗಳ ಹಚ್ಚುವುದೇ
ಸದಾ ನನ್ನ ಕಾಯಕ.
ಜ್ಞಾನದ ಬೆಳಕಿಗಾಗಿಯೇ
ಹುಟ್ಟಿ-ಸಾಯ್ವ ಶಿಕ್ಷಕ.
... ... ... ... ... ... ... ...
✍..ತ್ರಿನೇತ್ರಜ.
ಶಿವಕುಮಾರ.ಹಿರೇಮಠ.
No comments:
Post a Comment