Sunday 18 February 2018

ಈ ಕ್ಷಣವನು ಬದುಕಿಕೊ

ಕವನ
               
 *ಈ ಕ್ಷಣವನು ಬದುಕಿಕೊ.*

[17/02, 11:32 a.m.]

ಹಣೆಬರಹವನು ಬಲ್ಲವರಿಲ್ಲ
ನಾಳೇನೆಂಬುದ ಕಂಡವರಿಲ್ಲ
ಕಾಣದ ಭವಿತವ
ಚಿಂತಿಸಿ ಚಿಂತಿಸಿ ಇಂದನು
ಸವೆಸುವ ಹುಚ್ಚೇಕೆ?
ನೆಮ್ಮದಿಯಿಂದ ನೆಮ್ಮದಿಗಾಗಿ
ಜಗಕ್ಕೆ ನೆಮ್ಮದಿ ನೀಡಲು
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ

ಅವರಿವರೊಂದಿಗೆ ನಿನ್ನ
ಅಳೆಯುವೆಯೇಕೆ
ನೀನು ನೀನೆ ಎಂಬುದ
ಮರೆಯುವೆಯೇಕೆ
ಮರುಳಾಗದಿರು ಪರರ
ಸತ್ತು ಹೊತ್ತೊಯ್ಯದ
ಸ್ವತ್ತು ಆಡಂಬರಕೆ,
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.

ಯೋಚಸಲೇಬೇಕೆಂದರೆ
ದೀನ ದುರ್ಬಲರ ಏಳ್ಗೆಗೆ,
ಖಗ ಮೃಗಗಳ ಬಾಳಿಗೆ
ಹಸಿರು ಸೊರಗಿಹ ಭೂಮಿಗೆ
ಮನಕುಲದ ಉಳಿವಿಗೆ
ನೀನೇನು ಮಾಡಬಲ್ಲೆಯೆಂದು ಯೋಚಿಸು.ಅದಾಗದಿರೆ
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.

ಬದುಕು ಚಿಕ್ಕ ಯಾತ್ರೆ
ಸ್ವಾರ್ಥ ಚಿಂತನೆಗಳ ಬಿಡು
ದುಡಿದು ಉಂಡುಟ್ಟು
ಬದುಕು,ಅದನೆ
ಮಕ್ಕಳಿಗೂ ಕಲಿಸು
ಆತ್ಮ ಸುಡುವ ಚಿಂತೆಯನಟ್ಟಿ
ಪರಮಾತ್ಮನೆಡೆಗೆ ಮನವಿಡು
ಯೋಚನೆ ನಿಲ್ಲಿಸು ಮನುಜ.
ಈ ಕ್ಷಣವನು ಬದುಕಿಕೊ.
🤘🏼🤘🏼🤘🏼🤘🏼🤘🏼🤘🏼🤘🏼🤘🏼🤘🏼
✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ

No comments:

Post a Comment