Monday 20 November 2017

ಅಕ್ಕಮಹಾದೇವಿ ಕುರಿತು ಕವನ


       

                  ಉಡುತಡಿಯ ದೀಪ್ತಿ

                  ------------------------

ಅಂಗದ ಭಂಗವ ಗೆದ್ದ ಅಕ್ಕಮಹಾದೇವಿ,
ಸಿರಿಗನ್ನಡಕ್ಕುಣಿಸಿದೆ ವಚನಾಮೃತದ ಸವಿ.

ಉಡುತಡಿಯಲ್ಲುದಯಿಸಿದ ಸದ್ಗುಣ ಶೀಲೆ.
ಓಂಕಾರಶೆಟ್ಟಿ-ಲಿಂಗಮ್ಮರ ಪ್ರೀತಿಯ ಬಾಲೆ.

ವಚನ ಭಂಗಕೆ ಕೌಶಿಕನ ಅರಮನೆ ತೊರೆದೆ.
ಸ್ತ್ರೀ ಸ್ವಾತಂತ್ರ್ಯಕೆ ಅಂದೇ ಮನ್ನುಡಿ ಬರೆದೆ.

ಮಾಯೆ ಮುಟ್ಟದ ದೀಪ್ತಿ ಹಾಗೆ ದಿಗಂಬರೆ.
ಕಾಮ ಕೆಡಿಸದ ವಿರಕ್ತಳು ನೀ ಕೇಶಾಂಬರೆ.

ಶಿವಾನುಭವದಲಿ ಜೀವದ ಭಂಗವ ಗೆದ್ದೆ.
ಅನುಭವಮಂಟಪದಲಿ ಸತ್ವಪರೀಕ್ಷೆ ಗೆದ್ದೆ.

ಶ್ರೀಚೆನ್ನಮಲ್ಲಿಕಾರ್ಜುನನೇ ಪತಿ ಎಂದಾಕೆ
ಕಡಿದು ತೇದರು ಕಂಪುಬಿಡದ ಚಂದನಚಕ್ಕೆ.

ನಿಂದಕರಿಗಳುಕದೆ ಮುನ್ನಡೆದ ಛಲಗಾರ್ತಿ
ಕರುನಾಡಿನ ಮೊಟ್ಟ ಮೊದಲ ವಚನಗಾರ್ತಿ

ಭಾವಶುದ್ಧಿಯಲಿ ಕರಗಲು ನಿನ್ನಯ ತನುಮನ
ನಿನ್ನಲ್ಲಿ ಕರಸ್ಥಲಗೊಂಡ ಚೆನ್ನಮಲ್ಲಿಕಾರ್ಜುನ
..... ..... ..... ..... ..... ..... ..... ..... ..... .....
✍...ತ್ರಿನೇತ್ರಜ.
    ಶಿವಕುಮಾರ.ಹಿರೇಮಠ.9945915780

No comments:

Post a Comment