Sunday 19 November 2017

ಕವನ 'ಗುರುನಮನ'

ಗುರುನಮನ

ಜ್ಞಾನದ ಕಡಲಲಿ ಈಜಲು ಕಲಿಸಿಹ
ಗುರುದೈವಕೆ ನಮನ.
ಬಾಳಿನದಾರಿಯ ಸುಗಮಗೂಳಿಸಿಹ
ಶಿಕ್ಷಕರಿಗೆ ನಮನ.

ಬೊಧನಾಕುಂಚದಿ ಹಲವು ಬಣ್ಣಗಳ
ಬಳಿದು ನಮ್ಮಯ ಬಾಳಿಗೆ,
ಸುಂದರ ಚಿತ್ತಾರ ಮಾಡಿದಿರೆಮ್ಮನು,
ತೋರಿಸಿದಿರಿ ಈ ಜಗದೆಡೆಗೆ.
ಜ್ಞಾನವ ನೀಡಿ, ಬೆಂಬಲ ತೋರಿ
ಶಿಲೆಯಲಿ ಕಲೆಯ ತುಂಬಿದಿರಿ

ಯಾವ ವೃತ್ತಿಯೂ ಕೈಗೂಡಲಾರದು
ಗುರುವೃತ್ತಿಯು ಕೃಪೆತೋರದಿರೆ.
ಯಾವ ಮನುಜನೂ ಸಾಧಿಸಲಾರನು
ಸುಗಮಕಾರರು ಜೊತೆಗಿರದಿರೆ.
ಹರ ಮುನಿದರೆ ಗುರು ಕಾಯುವರು.
ಶಿಕ್ಷಕ ಭಾಗ್ಯವ ತೋರುವರು.
..... ..... ...... ...... ..... ..... ..... ....
✍ತ್ರಿನೇತ್ರಜ.
ಶಿವಕುಮಾರ.ಹಿರೇಮಠ.

No comments:

Post a Comment