ಕಥನ ಕವನ.
ಬೇಸತ್ತವಳು
.... ...... ..... .....
ಯಾಕರ ಹೆಣ್ಣುಜಲುಮ
ಕೊಟ್ಟೆಯೋ? ಶಿವನೇ! |
ಸಾಕಪ್ಪಾ ; ನಿನ್ನ ಪಾದಕ
ಸೇರಿಸಿಕೋ ಬೇಗನೆ ||
ಕಟ್ಟಿಕೊಂಡವ ಕುಡುಕ ಗಂಡ,
ಜೂಜಿನ್ಯಾಗೇ ಮಳುಗೊ ಭಂಡ;
ಇವ್ನ ಚಟಕ ಹೊಲಮನಿ ದಂಡ,
ನಗತಾರ ಜನಾ ಬಾಳೇವ ಕಂಡ ||
ಮುಪ್ಪಾಗ್ಯಾರ ನನ್ನ ಅತ್ತಿ-ಮಾವ,
ಅವರಿಗಂತ ನಾ ಹಿಡದೀನಿ ಜೀವ;
ಸೋಮಾರಿಗಂಡ ದುಡಿಲಾರದವ,
ಯಾರಿಗಿ ಹೇಳಲಿ ನನ್ನ ನೋವ ||
ಬೆನ್ಹಿಂದ ಬಂಜಿ ಅನ್ನತಾರ ಜನ,
ವಾರಿಗೇರು ನಕ್ಕು ತೆಗಿತಾರ ಮಾನ;
ಆದರೂ ಎಲ್ಲಾ ಸಹಿಸಿಕೋತೇನ,
ಬಡ್ತನಕ ಮಕ್ಳು ಬ್ಯಾಡೋ ಶಿವನ ||
ಆಗ ಕಲಿಲಿಲ್ಲ ನಾನೂ ನಾಲ್ಕಕ್ಷರ.
ಈಗ ಅರಿವಾತು; ಬಾಳೇ ಬೇಸರ.
ಮುಂದಿನ ಜನ್ಮ ಅಂತ ಇದ್ದರ
ಹೆಣ್ಣಾಗಿ ಹುಟ್ಟಿಸಬ್ಯಾಡೊ ಹರ ||
✍.. ತ್ರಿನೇತ್ರಜ.
ಶಿವಕುಮಾರ.ಹಿರೇಮಠ.
*ಕಥನ ಕವನ ಸ್ಪರ್ಧೆ -ದಿ||೩/೧೧/೨೦೧೭ ರ ಫಲಿತಾಂಶ*
%$%$%$%$%$%$%$%$%$%$%$
*ಪ್ರಥಮ ಸ್ಥಾನ:-*ತ್ರಿನೇತ್ರಜ.(ಬೇಸತ್ತವಳು).
@-ತ್ರಿನೇತ್ರಜರವರು ಕಥನವನ್ನು ಚೆನ್ನಾಗಿ ಹೆಣೆದಿದ್ದಾರೆ.ಪ್ರಾಸಗಳನ್ನು ಸಂದರ್ಭೋಚಿತವಾಗಿ ಹೊಂದಿಸಿದ್ದಾರೆ.ಪ್ರಾಸವು ಕಥನ ಕವನಕ್ಕೆ ಮೆರುಗು ನೀಡುತ್ತವೆ ಜೊತೆಗೆ ಕುಟುಂಬದ ಬವಣೆಯನ್ನು ವಿವರಿಸುವುದರೊಂದಿಗೆ ಹೆಣ್ಣಿಗೆ ಶಿಕ್ಷಣದ ಮಹತ್ವವನ್ನುಸಾರಿದ್ದಾರೆ ಹೀಗಾಗಿ ಅದು ಓದುಗರ ಮನಸ್ಸಿಗೆ ಹಿಡಿಸುತ್ತದೆ ಎಂದು ನನ್ನ ಅನಿಸಿಕೆ.
*ದ್ವಿತೀಯ ಸ್ಥಾನ:-*ಗಿರಿಜಾ ಇಟಗಿ.(ಜೀವನ್ಮುಕ್ತಿ)
@-ಗಿರಿಜಾ ಇಟಗಿಯವರು ಕೂಡ ಕಥನವನ್ನು ಮನಮುಟ್ಟುವಂತೆ,ಪ್ರಾಸಬದ್ಧವಾಗಿ ಮತ್ತು ಕೆಲವೊಂದು ಹಿತನುಡಿಯಂತಹ ಮಾತುಗಳನ್ನು ಸಂದರ್ಭೋಚಿತವಾಗಿ ಬಳಸಿದ್ದಾರೆ.ಉತ್ತಮ ಪ್ರಯತ್ನ.
*ತೃತೀಯ ಸ್ಥಾನ:-*ಡಾ|| ಸುರೇಶ ನೆಳಗುಳಿ.(ಸೋಮಾರಿ ಮಗನ ಕಥೆ-ವ್ಯಥೆ).
@-ಡಾ.ಸುರೇಶ ನೆಳಗುಳಿಯವರು ಸಂಕಷ್ಟ ಕುಟುಂಬದ ಎಲ್ಲ ಆಯಾಮಗಳನ್ನು ಪರಿಚಯಿಸಿದ್ದಾರೆ ಹಾಗೂ ಕವನವನ್ನು ಓದಿಸಿಕೊಂಡು ಹೋಗುವಂತೆ ರಚಿಸಿದ್ದಾರೆ.
:::::::::::;::::::::::::::::;;;;;;:::::;:;:;;;;;;;;;;;;;;;;;
*ಮನದ ಮಾತು*
ಈ ಬಾರಿ ಕಥನ ಕವನಕ್ಕೆ ೮ ಕವನಗಳು ಬಂದಿದ್ದು ಎಲ್ಲಾ ಕವನಗಳನ್ನು ನಮ್ಮ ಕವಿಗಳು ಮತ್ತು ಕವಯಿತ್ರಿಯರು ಬಹಳ ಚನ್ನಾಗಿ ನಾ ಮೇಲು ತಾ ಮೇಲು ಎನ್ನುವಂತೆ ರಚಿಸಿದ್ದಾರೆ.ಹಿಂದಿನ ಸ್ಪರ್ಧೆಯ ಕಥನ ಕವನಗಳಿಗಿಂತ ಈ ಬಾರಿಯ ಕವನಗಳು ಮಾತ್ರ ಪ್ರಶಂಶನೀಯವಾಗಿವೆ,ಹೀಗಾಗಿ ನಿರ್ಣಯ ಮಾಡಲು ನನಗೆ ಬಹಳ ಕಷ್ಟವಾಯಿತು.ಎಲ್ಲ ಕವನಗಳು ಆಯ್ಕೆಯ ಕವನಗಳೇ ಆದರೆ ಸ್ಪರ್ಧಾ ದೃಷ್ಟಿಯಿಂದ ಕೆಲವು ಮಾನದಂಡಗಳನ್ನು ಉಪಯೋಗಿಸಿ ಆಯ್ಕೆ ಮಾಡಿರುವೆ.
....................
* ಪಿ.ಎಸ್.ಮಳಗಿ.
ತಾವರಗೇರಾ.
ನಿರ್ಣಾಯಕರು.
ಬೇಸತ್ತವಳು
.... ...... ..... .....
ಯಾಕರ ಹೆಣ್ಣುಜಲುಮ
ಕೊಟ್ಟೆಯೋ? ಶಿವನೇ! |
ಸಾಕಪ್ಪಾ ; ನಿನ್ನ ಪಾದಕ
ಸೇರಿಸಿಕೋ ಬೇಗನೆ ||
ಕಟ್ಟಿಕೊಂಡವ ಕುಡುಕ ಗಂಡ,
ಜೂಜಿನ್ಯಾಗೇ ಮಳುಗೊ ಭಂಡ;
ಇವ್ನ ಚಟಕ ಹೊಲಮನಿ ದಂಡ,
ನಗತಾರ ಜನಾ ಬಾಳೇವ ಕಂಡ ||
ಮುಪ್ಪಾಗ್ಯಾರ ನನ್ನ ಅತ್ತಿ-ಮಾವ,
ಅವರಿಗಂತ ನಾ ಹಿಡದೀನಿ ಜೀವ;
ಸೋಮಾರಿಗಂಡ ದುಡಿಲಾರದವ,
ಯಾರಿಗಿ ಹೇಳಲಿ ನನ್ನ ನೋವ ||
ಬೆನ್ಹಿಂದ ಬಂಜಿ ಅನ್ನತಾರ ಜನ,
ವಾರಿಗೇರು ನಕ್ಕು ತೆಗಿತಾರ ಮಾನ;
ಆದರೂ ಎಲ್ಲಾ ಸಹಿಸಿಕೋತೇನ,
ಬಡ್ತನಕ ಮಕ್ಳು ಬ್ಯಾಡೋ ಶಿವನ ||
ಆಗ ಕಲಿಲಿಲ್ಲ ನಾನೂ ನಾಲ್ಕಕ್ಷರ.
ಈಗ ಅರಿವಾತು; ಬಾಳೇ ಬೇಸರ.
ಮುಂದಿನ ಜನ್ಮ ಅಂತ ಇದ್ದರ
ಹೆಣ್ಣಾಗಿ ಹುಟ್ಟಿಸಬ್ಯಾಡೊ ಹರ ||
✍.. ತ್ರಿನೇತ್ರಜ.
ಶಿವಕುಮಾರ.ಹಿರೇಮಠ.
*ಕಥನ ಕವನ ಸ್ಪರ್ಧೆ -ದಿ||೩/೧೧/೨೦೧೭ ರ ಫಲಿತಾಂಶ*
%$%$%$%$%$%$%$%$%$%$%$
*ಪ್ರಥಮ ಸ್ಥಾನ:-*ತ್ರಿನೇತ್ರಜ.(ಬೇಸತ್ತವಳು).
@-ತ್ರಿನೇತ್ರಜರವರು ಕಥನವನ್ನು ಚೆನ್ನಾಗಿ ಹೆಣೆದಿದ್ದಾರೆ.ಪ್ರಾಸಗಳನ್ನು ಸಂದರ್ಭೋಚಿತವಾಗಿ ಹೊಂದಿಸಿದ್ದಾರೆ.ಪ್ರಾಸವು ಕಥನ ಕವನಕ್ಕೆ ಮೆರುಗು ನೀಡುತ್ತವೆ ಜೊತೆಗೆ ಕುಟುಂಬದ ಬವಣೆಯನ್ನು ವಿವರಿಸುವುದರೊಂದಿಗೆ ಹೆಣ್ಣಿಗೆ ಶಿಕ್ಷಣದ ಮಹತ್ವವನ್ನುಸಾರಿದ್ದಾರೆ ಹೀಗಾಗಿ ಅದು ಓದುಗರ ಮನಸ್ಸಿಗೆ ಹಿಡಿಸುತ್ತದೆ ಎಂದು ನನ್ನ ಅನಿಸಿಕೆ.
*ದ್ವಿತೀಯ ಸ್ಥಾನ:-*ಗಿರಿಜಾ ಇಟಗಿ.(ಜೀವನ್ಮುಕ್ತಿ)
@-ಗಿರಿಜಾ ಇಟಗಿಯವರು ಕೂಡ ಕಥನವನ್ನು ಮನಮುಟ್ಟುವಂತೆ,ಪ್ರಾಸಬದ್ಧವಾಗಿ ಮತ್ತು ಕೆಲವೊಂದು ಹಿತನುಡಿಯಂತಹ ಮಾತುಗಳನ್ನು ಸಂದರ್ಭೋಚಿತವಾಗಿ ಬಳಸಿದ್ದಾರೆ.ಉತ್ತಮ ಪ್ರಯತ್ನ.
*ತೃತೀಯ ಸ್ಥಾನ:-*ಡಾ|| ಸುರೇಶ ನೆಳಗುಳಿ.(ಸೋಮಾರಿ ಮಗನ ಕಥೆ-ವ್ಯಥೆ).
@-ಡಾ.ಸುರೇಶ ನೆಳಗುಳಿಯವರು ಸಂಕಷ್ಟ ಕುಟುಂಬದ ಎಲ್ಲ ಆಯಾಮಗಳನ್ನು ಪರಿಚಯಿಸಿದ್ದಾರೆ ಹಾಗೂ ಕವನವನ್ನು ಓದಿಸಿಕೊಂಡು ಹೋಗುವಂತೆ ರಚಿಸಿದ್ದಾರೆ.
:::::::::::;::::::::::::::::;;;;;;:::::;:;:;;;;;;;;;;;;;;;;;
*ಮನದ ಮಾತು*
ಈ ಬಾರಿ ಕಥನ ಕವನಕ್ಕೆ ೮ ಕವನಗಳು ಬಂದಿದ್ದು ಎಲ್ಲಾ ಕವನಗಳನ್ನು ನಮ್ಮ ಕವಿಗಳು ಮತ್ತು ಕವಯಿತ್ರಿಯರು ಬಹಳ ಚನ್ನಾಗಿ ನಾ ಮೇಲು ತಾ ಮೇಲು ಎನ್ನುವಂತೆ ರಚಿಸಿದ್ದಾರೆ.ಹಿಂದಿನ ಸ್ಪರ್ಧೆಯ ಕಥನ ಕವನಗಳಿಗಿಂತ ಈ ಬಾರಿಯ ಕವನಗಳು ಮಾತ್ರ ಪ್ರಶಂಶನೀಯವಾಗಿವೆ,ಹೀಗಾಗಿ ನಿರ್ಣಯ ಮಾಡಲು ನನಗೆ ಬಹಳ ಕಷ್ಟವಾಯಿತು.ಎಲ್ಲ ಕವನಗಳು ಆಯ್ಕೆಯ ಕವನಗಳೇ ಆದರೆ ಸ್ಪರ್ಧಾ ದೃಷ್ಟಿಯಿಂದ ಕೆಲವು ಮಾನದಂಡಗಳನ್ನು ಉಪಯೋಗಿಸಿ ಆಯ್ಕೆ ಮಾಡಿರುವೆ.
....................
* ಪಿ.ಎಸ್.ಮಳಗಿ.
ತಾವರಗೇರಾ.
ನಿರ್ಣಾಯಕರು.
No comments:
Post a Comment