ಕಾಲಚಕ್ರದೊಳು
..... ..... ..... .....ಕಾಲ ಕೆಟ್ಟ್ಹೋಯಿತೋ ತ್ರಿನೇತ್ರಜ
ಕಾಲಚಕ್ರದಲಿ ಅಧರ್ಮವತೋರಿ
ತಲೆಕೆಳಗಾಗಿ ಬಾಳುತಿರುವೆವೊ.
ಧನಸಂಗ್ರಹದ ದಾಹಿಗಳಾಗಿ,
ನ್ಯಾಯ ನೀತಿಯ ಮರೆತವರಾಗಿ,
ಮೇಲೇರುವವರ ಕಾಲೆಳವರಾಗಿ,
ಸ್ವಾರ್ಥ ಸಾಧನೆಗಳಿಗೆ ನಾವು
ತಲೆಕೆಳಗಾಗಿ ಬಾಳುತಿರುವೆವು.
ಹಾರ ತುರಾಯಿಗೆ ಸೋತವರಾಗಿ,
ಬಹುಪರಾಕಿನ ಭಟ್ಟಂಗಿಗಳಾಗಿ,
ನೇರ ನುಡಿಗಾರರ ದೂಷಿಪರಾಗಿ,
ಎಲ್ಲಬಲ್ಲೆವೆಂಬ ಅಹಂಕಾರದಲಿ
ತಲೆಕೆಳಗಾಗಿ ಬಾಳುತಿರುವೆವು.
ತಿರುಗುವ ಚಕ್ರ ನಿಲ್ಲದೋ ಮನುಜ
ಮೇಲ್ಬಂದಾಗ ಧರ್ಮ, ಮಾಡಿದ
ಕರ್ಮಫಲ ಅನುಭವಿಸುವೆವೊ.
.... .... .... .... ....
✍ ತ್ರಿನೇತ್ರಜ.
ಶಿವಕುಮಾರ.ಹಿರೇಮಠ.
No comments:
Post a Comment