✍ ತ್ರಿನೇತ್ರಜ.
ಸತ್ಯ ದರ್ಶನ
ನದಿದಡದಲಿ ಆಲಯದೆದುರು
ಅರಳಿಹ ಪಾರಿಜಾತ ನಾ.
ದೂರದಲಿ ಕಾಣುವ ಬೆಟ್ಟದ
ಅಂದಕೆ ಮರುಳಾಗಿಹೆ ನಾ.
ಅಲ್ಲಿಗೆನ್ನ ಕರೆದೊಯ್ಯಲು
ಕೇಳಿದೆ ವಾಯುವನು.
ಒಪ್ಪಿದ ಅವನಿಗೆ ಸವರಿದೆ
ನನ್ನ ಸುಗಂಧವನು.
ಗಾಳಿಯನೇರಿ ಸಾಗಿದೆ ನಾನು
ಬೆಟ್ಟದಾ ಬಳಿ ಕಾತುರದೆ.
ಕಲ್ಲು, ಪೊದೆ, ಮುಳ್ಳು, ಮಣ್ಣಿನ
ರಾಶಿ ನೋಡಿ ಅವಾಕ್ಕಾದೆ!!
'ಪವನನನೇ ತಡೆಯುವೆ'
ಎನ್ನುವನು ಆ ಹುಂಬ.
ಚಿಕ್ಕ ಪುಟ್ಟ ಹೂಗಳಿಗೋ
ಇನ್ನಿಲ್ಲದ ಒಣ ಜಂಭ.
ಬಂದ ದಾರಿಗೆ ಸುಂಕವಿಲ್ಲ!
ಮತ್ತೆ ಗಾಳಿಯ ಕೇಳಿದೆ.
'ನದಿ ಮೇಲೆ ಬಿಡು ನನ್ನ
ಆಲಯದ ದಡ ಸೇರುವೆ', "ಎಲ್ಲೂ ಇಲ್ಲದ್ದು ಅಲ್ಲೇಇದೆ". ..... .... ..... .....
No comments:
Post a Comment