Tuesday 28 November 2017



ಶಿವರೋದನ
 -- -- -- -- -- --
ನಿರಾಡಂಬರನ ಮೆಚ್ಚಿ ವರಿಸಿದ್ದ
ಅರ್ಧಾಂಗಿನಿ, ನನ್ನ ಹೃದ್ಯಮಣಿ.
ದುರುಳಪಿತನ ಯಜ್ಞಕುಂಡಕೆ.
ಧುಮುಕಿದ ಸತಿ ದಾಕ್ಷಾಯಿಣಿ.

ಹರಡಿಹುದು ಅಗ್ನಿಜ್ವಾಲೆಯು
ಇದೋ ನನ್ನಯ ಹೃದಯಕೆ.
ತಂಪನೆರೆಯಲಾರದೆ ಸೋತಿತು
ಮಂದ ಮಾರುತವೂ ಮನಕೆ.

ಅಲೆಯುತಿಹೆನು ಬುವಿಯುದ್ದಕು
ದಾರಿಯದೇಕೋ ಸಾಗದಾಯ್ತು.
ಏಕಾಂತವನ್ನರಸಿ ಹೊರಟಿಹೆನು
ವಿರಾಮವೇ ಬೇಡದಂತಾಯ್ತು.

ಲೋಕ ಕೈಂಕರ್ಯ ನನಗೆ ಸಾಕು;
ಶೂನ್ಯನಾದೆ ಭಾವನೆಗಳು ಕಮರಿ.
ಗಿಡ,ಮರ-ಬಳ್ಳಿ ,ಗಿರಿ-ಕಂದರಗಳೆ
ಎನಗೆನ್ನ ಪ್ರೀಯಸತಿಯ ತೋರಿರಿ.
--------------------------
✍..ತ್ರಿನೇತ್ರಜ.
ಶಿವಕುಮಾರ.ಹಿರೇಮಠ.

No comments:

Post a Comment