ಕವನ
ಅನುಬಂಧ
ಊರುತಾ ಬೇರುಗಳ
ನನ್ನೆದೆಯ ಅಂತರಾಳಕೆ,
ಚಿಗುರೊಡೆದು ಬೆಳೆಯಲು
ನಿನ್ನ ಹೊಸ ನೂರಾಸೆ;
ಆಸರೆಯಾಗುವೆ ನಾನು,
ಭರವಸೆಯು ನನ್ನ ಮೇಲಿರಲಿ.
ಪ್ರೇಮದಿಂದಲಿ ನೀ ನೀಡಿದ
ಕೈ ಹಿಡಿದಿರುವೆ,ಅಳುಕದಿರು.
ಚಾಚುತ್ತ ಬೆಳೆ ನವಿರಾಗಿ
ಹಚ್ಚ ಹಸಿರಿನ ಕನಸುಗಳ
ಆ ನೀಲಿಯ ಬಾನೆತ್ತರಕೆ;
ನಿನಗೆನ್ನದೆಲ್ಲವೂ ಮೀಸಲಿರಲಿ.
ಸುರಿವ ಮಳೆ ನೀರನು
ಹೀರಿ ಒಡಲಾಳದೊಳು
ಕಾಯ್ದಿರಿಸುವೆ ಎಂದಿಗೂ,
ಬಾಡದಿರು ನೀನು ತೃಷೆಗೆ.
ಅಂಜದಿರು ಗಾಳಿ ರಭಸಕ್ಕೆ
ನಂಬಿಕೆಯು ಭದ್ರವಾಗಿರಲಿ.
ನಿನ್ನ ಹೂವೊಳು ಅರಳಿ
ಫಲಗಳಲಿ ಸಿಹಿರಸವಾಗಿ
ಬೆರೆತು ಒಂದಾಗುವೆನು.
ನನ್ನ ತೋಳಿಗೆ ಬಂದಿಳಿವ
ನಿನ್ನರೂಪಗಳ ಬಚ್ಚಿಡುವೆ;
ಇಂಥ ಕೈಸೇರಿ ನಿನ್ನಂತಾಗಲಿ.
... .... .... .... .... ...
✍..ತ್ರಿನೇತ್ರಜ.
ಅನುಬಂಧ

ಊರುತಾ ಬೇರುಗಳ
ನನ್ನೆದೆಯ ಅಂತರಾಳಕೆ,
ಚಿಗುರೊಡೆದು ಬೆಳೆಯಲು
ನಿನ್ನ ಹೊಸ ನೂರಾಸೆ;
ಆಸರೆಯಾಗುವೆ ನಾನು,
ಭರವಸೆಯು ನನ್ನ ಮೇಲಿರಲಿ.
ಪ್ರೇಮದಿಂದಲಿ ನೀ ನೀಡಿದ
ಕೈ ಹಿಡಿದಿರುವೆ,ಅಳುಕದಿರು.
ಚಾಚುತ್ತ ಬೆಳೆ ನವಿರಾಗಿ
ಹಚ್ಚ ಹಸಿರಿನ ಕನಸುಗಳ
ಆ ನೀಲಿಯ ಬಾನೆತ್ತರಕೆ;
ನಿನಗೆನ್ನದೆಲ್ಲವೂ ಮೀಸಲಿರಲಿ.
ಸುರಿವ ಮಳೆ ನೀರನು
ಹೀರಿ ಒಡಲಾಳದೊಳು
ಕಾಯ್ದಿರಿಸುವೆ ಎಂದಿಗೂ,
ಬಾಡದಿರು ನೀನು ತೃಷೆಗೆ.
ಅಂಜದಿರು ಗಾಳಿ ರಭಸಕ್ಕೆ
ನಂಬಿಕೆಯು ಭದ್ರವಾಗಿರಲಿ.
ನಿನ್ನ ಹೂವೊಳು ಅರಳಿ
ಫಲಗಳಲಿ ಸಿಹಿರಸವಾಗಿ
ಬೆರೆತು ಒಂದಾಗುವೆನು.
ನನ್ನ ತೋಳಿಗೆ ಬಂದಿಳಿವ
ನಿನ್ನರೂಪಗಳ ಬಚ್ಚಿಡುವೆ;
ಇಂಥ ಕೈಸೇರಿ ನಿನ್ನಂತಾಗಲಿ.
... .... .... .... .... ...
✍..ತ್ರಿನೇತ್ರಜ.
No comments:
Post a Comment