*ಯಾರಿಗಾಗಿ?*
09/12/2017, 1:57 p.m.

ದೇಶದ ಬೆನ್ನೆಲುಬುಗಳ
ಏಣಿಮಾಡಿ ಏರುತಿರುವವರೆ
ಯಾರಿಗಾಗಿ? ನಿಮ್ಮಾಟ
ಯಾರಿಗಾಗಿ?
ಚಿಂತೆಯಿಲ್ಲದ ನಾಯಕರು
ಮತ ಹಬ್ಬಗಳು ಬಂದಾಗ,
ಮೊಸಳೆ ಕಣ್ಣೀರಿಂದ ಖಾಲಿ
ನಡೆಸುವ ಸಂವಾದ ಯಾರಿಗಾಗಿ?
ಒಣಗಿದ ತೆಳು ಮೋಡಗಳು
ನೋಡಿ ನೋಡದಂತೆ ಸಾಗುವಾಗ ,
ತಾಸುಗಟ್ಟಲೆ ಅರಚುವ
ಚಿಂತಕರ ಸಂವಾದ ಯಾರಿಗಾಗಿ?
ಸೆಟೆದುಹೋದ ಪೈರನು
ನೋಡಲಾಗದ ಬಡದೇಹ
ಒಣಮರಕೆ ನೇತಾಡುವಾಗ,
ಬುದ್ಧಿಗಳ ಸಂವಾದ ಯಾರಿಗಾಗಿ?
----------------
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.
No comments:
Post a Comment