ವಿಜಯಪುರದ ನಿರ್ಭಯಾಳಿಗೆ ನುಡಿ ನಮನ
ಕಮರಿತು ಮೊಗ್ಗು
ಮೊಗ್ಗೊಂದು ಅರಳುವ ಮುನ್ನಕಿತ್ತು ದುಷ್ಟರು ಯಮನಿಗಿತ್ತರು.
ಜಗವ ಅರಿಯುವ ಮುನ್ನವೆ
ಕಿತ್ತುತಿಂದು ತೀಟೆಗೆ ಕೊಂದರು.
ನಿಷೇಧಿಸಿದ ಗಾಂಜಾನಶೆಯು
ಗುಮ್ಮಟನಗರದಿ ನುಸುಳಿದೆ.
ರಕ್ಕಸರ ರಕ್ತದಲಿ ಬೆರೆತುಹೋಗಿ
ಕಾಮದಾಸೆಯ ಹುಚ್ಚಾಗಿಸಿದೆ.
ಕಲಿವ ಆಸೆಯ ಹೆಗಲಿಗೇರಿಸಿ
ಬಾಲೆ ಸಖಿಯೊಡನೆ ಸಾಗಿರಲು.
ಬುದ್ದಿಹೀನ ಕ್ರೂರ ಕಂಸರು
ಹೊತ್ತೋಯ್ದು ಹೊಸಕಿದರು.
ತಮ್ಮ ಮನೆಯ ಹೆಣ್ಣಂತೆಯೆ
ಇವಳೂ ಎಂಬುದ ಮರೆತರು.
ಹರಿಣಿಯ ಮೇಲೆ ಹಂದಿಗಳಂತೆ
ಆರ್ಭಟಿಸಿ ಉಸಿರ ಅಳಿಸಿದರು.
ಮಾನವರೇಕಾದರೋ ಇವರು
ನಾಯಿಜನ್ಮವೆಷ್ಟೋ ವಾಸಿ.
ನಗರಮಧ್ಯ ಗಲ್ಲುಗೈದರೂ
ಬದುಕಿ ಬಂದಾಳೆ ಸತ್ತ ಅರಸಿ?
✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.
ಸಹ ಶಿಕ್ಷಕರು
ಅನವಾಲ
ಬಾಗಲಕೋಟೆ.
[22/12, 5:09 p.m.] Shivakumara Hiremath:
No comments:
Post a Comment