Saturday 17 March 2018

*ಸಾಗರೋಲ್ಲಂಘನ*

*ಸಾಗರೋಲ್ಲಂಘನ*
[04/02, 1:59 p.m.]


ಲಂಕೆಯ ತಲುಪುವ ಯತ್ನಕೆ
ಸಾಗರನಾದನು ಅಡ್ಡಿ
ವಾನರ ಬಳಗ ಮಂಕಾಯಿತು
ಮನದಿ ಶಂಕೆಯು ಮೂಡಿ

ರಾಮನ ಸೇವೆಗೆ ಆತುರ ಮನದಿ
ದೃಷ್ಟಿಗೆ ನಿಲುಕದೆ ಹರಡಿದೆ ಶರಧಿ
ಸಂಶಯ ಮೂಡಿತು ಮೋಡದ ತೆರದಿ
ಯೋಚಿಸಿ ನಿಂತನು ಸಾಗರ ತಟದಿ

ಜಾಬವಂತನು ತುಂಬಲು ಧೈರ್ಯ
ನೆನಪಿಸಿಕೊಂಡನು ಬಾಲ್ಯದ ಶೌರ್ಯ
ಬೆಳೆದು ನಿಂತನು ವೀರ ಕಪಿವರ್ಯ
ಅಣಿಯಾದ ನೆನೆದು ಸ್ವಾಮಿಕಾರ್ಯ

ಛಾಂಗನೆ ಹಾರಿದ ಹನುಮಂತ
ಸೀಮೋಲಂಘಿಸಿ ಧೀಮಂತ
ಸೀತೆಯ ಅರಸಲು ಶರವೇಗದಲಿ
ಬಾನಿಗೆ ಚಿಮ್ಮಿದ ಬಲವಂತ

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.

No comments:

Post a Comment