Friday 2 March 2018

*ಚುನಾವಣೆ*


[02/03, 5:46 p.m.]
ಕವನ

 
*ಚುನಾವಣೆ*

ಬಂತು ಚುನಾವಣೆ ಮತ್ತೆ
ಸ್ವಾಗತ ಸುಸ್ವಾಗತ
ನಾಸಿಕಕೆ ನವನೀತ ನಾತ
ಇದು ಅವರಿಗೆ ಕರಗತ

ಮನ ಮನೆಗಳ ಒಡೆಯುವ
ಧ್ವಜಗಳ ಹಾರಾಟ
ಜಿದ್ದಾಜಿದ್ದಿಗೆ ಬಲಿಎಷ್ಟೋ
ಅಧಿಕಾರಕ್ಕೆ ಹೊರಾಟ

ಹಳ್ಳಿ ಹಳ್ಳಿಗೂ ಸಾಂಕ್ರಾಮಿಕ
ಬಾಂಧವ್ಯದ ಬಿರುಕು
ಪಾರ್ಟಿಗಳ ಪೈಪೋಟಿಗೆ
ಸಂಬಂಧದಿ ಒಡಕು

ಜನಸೇವಕರಿವರು ಅದ್ಹೇಗೆ
ನಾಯಕರಾಗಿ ನಿಂತರು?
ಜನಬಲಕೆ ಕಣಕ್ಕಿಳಿದರು
ಕೋಟಿಗಳ ಸಿರಿವಂತರು

ಪ್ರಜಾಸೇವೆಗೆಂದೇ ಹಾಕಿ
ನಿಷ್ಠೆಯ ಮುಖವಾಡ
ತೋರುವರು ಗೆದ್ದಮೇಲೆ
ಸ್ವಾಭಿವೃದ್ಧಿಯ ಪವಾಡ

ಪ್ರಜೆಯನ್ನು ಪ್ರಭು ಎನ್ನುವ
ಕಾಲವೂ ಬಂದೀತೆ?
ಮುಗಿಯಲೊಮ್ಮೆ ಚುನಾವಣೆ
ನಮ್ಮ ಬವಣೆ ತಪ್ಪೀತೆ?
.... .... ..... .... ....
✍🏼  ತ್ರಿನೇತ್ರಜ್

ಶಿವಕುಮಾರ. ಹಿರೇಮಠ


No comments:

Post a Comment